ಕನ್ನಡ ರಾಜ್ಯೋತ್ಸವದ ಕಲರವ
ಕನ್ನಡದ ವಿವಿಧ ಪ್ರಕಾರದ
ಸಾಹಿತ್ಯವನ್ನು ಪರಿಚಯಿಸುವುದರ ಮೂಲಕ
ನಮ್ಮ ಸ.ಕಿ.ಪ್ರಾ ಶಾಲೆ ದೇವಾಪೂರದೊಡ್ಡಿಯಲಿ
ಆಚರಿಸಲಾಯಿತು.
ನಾಡದೇವಿಗೆ ಕಾಡು ಹೂಗಳ ಅರ್ಪಣೆ
ಗೋಡೆ ಬರಹ
ನನ್ನೆರಡು ಮಾತುಗಳು
💛❤💛❤
ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ-ಚಂಪಾ ಅವರ
ಪದ್ಯ ವಾಚನ
ಶಾಂತಿ ಬೀಜಗಳ ಜತನ-ಡಾ.ಪ್ರಕಾಶ ಖಾಡೆ
ಹ.ಸ ಬ್ಯಾಕೋಡ್ ಅವರ ಬೆಟ್ಟದ ಹೂ ಮತ್ತು ಕುರಿಮರಿ
ಮೌನ ಯುದ್ಧ- ಸುರೇಶ ಎಲ್.ರಾಜಮಾನೆ
ಗುಬ್ಬಿಗೂಡು- ನಾರಾಯಣ ಬಾಬಾನಗರ
ಬೆಳದಿಂಗಳು-ಗುರು ಹಿರೇಮಠ
ಬಸವಣ್ಣನವರ ವಚನಗಳ ಓದು
ಪಪ್ಪು ನಾಯಿಯ ಪೀಪಿ-ವಿಜಯಶ್ರೀ ಹಾಲಾಡಿ
ನಾ..ನೀ.. -ಪ್ರಕಾಶ ಡಂಗಿ
ಬಂದ ಬಂದ ಸಂತಮ್ಮಣ್ಣ ಮಕ್ಕಳ ಹಾಡು ಮತ್ತು
ಕತೆಗಳ ಓದು
ರಾಷ್ಟ್ರಕವಿ ಕುವೆಂಪು ಅವರ ವಿಚಾರಗಳ ಓದು
ವಿಜಯಶ್ರೀ ಹಾಲಾಡಿ ಅವರ-ಜಂಬಿಕೊಳ್ಳಿ ಮತ್ತು ಪುಟ್ಟ ವಿಜಿ
ಗುಬ್ಬಿ ಗೂಡಿಗೆ ಬಂತು- ನಾ.ಡಿಸೋಜ ಅವರ
ಮಕ್ಕಳ ಕತೆಗಳ ಓದು
ಹಾಡು ಹುಟ್ಟಿದ ಸಮಯ
ನಾನು ಮತ್ತು ಕನ್ನಡಮ್ಮ
ಏನೊ ಒಂಥರಾ ಖುಷಿ
ಮಾತು ಮಾತು ಮಾತು ಅಷ್ಟೆ
ಪ್ರದರ್ಶನ
ಮತ್ತೆ ಮತ್ತೆ ಓದು
ಗುಂಪಿನಲ್ಲಿ ಓದು
ಸುಡುವ ಬೆಂಕಿಯ ನಗು-ಸುರೇಶ ಎಲ್.ರಾಜಮಾನೆ
ಕಣ್ಣಪಾಪೆಯ ಬೆಳಕು- ಡಾ.ಟಿ.ಯಲ್ಲಪ್ಪ
ಮುರಿದ ಟೊಂಗೆಯ ಚಿಗುರು- ಸೂಗುರೇಶ ಹಿರೇಮಠ
ಒಂಟಿ ಹೊಸ್ತಿಲು- ಅಶೋಕ ಹೊಸಮನಿ
ಕವಿತೆಗಳ ಬಗ್ಗೆ, ಕತೆಗಳ ಬಗ್ಗೆ, ಹಾಡುಗಳ ಬಗ್ಗೆ, ಸಾಹಿತ್ಯದ ಬಗ್ಗೆ
ಸಾಹಿತಿಗಳ ಬಗ್ಗೆ, ಕನ್ನಡದ ಬಗ್ಗೆ ನಾ ಮಾತಾಡಿದ್ದು..
ಕನ್ನಡ ರಾಜ್ಯೋತ್ಸವದ ಈ ವಿಭಿನ್ನವಾದ ಆಚರಣೆ ನನಗಂತೂ ತುಂಬಾ ಖುಷಿ ನೀಡಿತು.
ಎಲ್ಲ ಕವಿತೆಗಳನ್ನು ಓದುವದರೊಂದಿಗೆ ಎಲ್ಲರ ಕವಿತೆಗಳ ಬಗ್ಗೆ
ಮಕ್ಕಳಿಗೆ ಅವರ ಬುದ್ಧಿಮಟ್ಟಕ್ಕೆ ನಿಲುಕುವಷ್ಟು
ಹೇಳಿಕೊಟ್ಟದ್ದಂತು ಇನ್ನೂ
ಖುಷಿ ನೀಡಿತು.
ಇವೆಲ್ಲದರ ಜೊತೆಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಕುರಿತ ಪುಸ್ತಕಗಳು
ಮತ್ತೆ ಗ್ರಂಥಾಲಯದ ಪುಸ್ತಕಗಳೂ ಜೊತೆಗಿದ್ದವು
ಮಕ್ಕಳು ಖುಷಿಖುಷಿಯಾಗಿ
ಒಂದಿನ ಪೂರ್ತಿ ಓದಿದ್ದು ಖುಷಿನೀಡಿತು.
ಕನ್ನಡವನ್ನು, ಕನ್ನಡ ಸಾಹಿತ್ಯವನ್ನು ಆರಾಧಿಸುವ ನಾನು
ಕನ್ನಡ ಶಾಲೆಯ ಕನ್ನಡ ಶಿಕ್ಷಕ ಎಂಬ ಹೆಮ್ಮೆ ಇಮ್ಮಡಿಯಾಯಿತು.